ಹರೆಕಳ ಹಾಬಜ್ಜ ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಮಂಗಳೂರು ನಗರದಿಂದ ಅನತಿ ದೂರದಲ್ಲಿರುವ ಹರೆಕಳದವರು. ಭಾರತ ಸರಕಾರ ನೀಡುವ ನಾಲ್ಕನೆಯ ಅತಿದೊಡ್ಡ ನಾಗರಿಕ ಪ್ರಶಸ್ತಿ ಆದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಸಮಾಜ ಸೇವಕ. ತಮ್ಮ ಗ್ರಾಮದಲ್ಲಿ ಕಿತ್ತಳೆ ಹಣ್ಣು ಮಾರಿ ಬಂದ ಹಣದ ಜೊತೆಗೆ ದಾನದ ಮೂಲಕ ಧನ ಸಂಗ್ರಹಿಸಿ ಸಕಾ‍ರಿ ಶಾಲೆ ಕಟ್ಟಲು ೧.೩೩ ಎಕರೆ ಜಮೀನು ನೀಡಿದವರು. ಅವರ ಈ ಸಾಧನೆ ಕಂಡು ಕೇಂದ್ರ ಸರಕಾರ ೨೦೨೦ರ ಪದ್ಮ ಶ್ರೀ ನೀಡಿ ಗೌರವಿಸಿದೆ. . == ಹುಟ್ಟೂರು == ಮಂಗಳೂರು ತಾಲೂಕಿನ ಕೊಣಾಜೆ ಸಮೀಪದ ಹರೇಕಳ ನ್ಯೂಪಡ್ಪು. == ಕುಟುಂಬ == ಹಾಜಬ್ಬ ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದು, ಪುತ್ರ ಪೈಂಟಿಂಗ್ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. == ಸಾಧನೆ == ಕಿತ್ತಳೆ ಹಣ್ಣು ಮಾರಿ ಸಂಪಾದಿಸಿದ ದುಡ್ಡಿನಲ್ಲಿ ಮಂಗಳೂರಿನ ಪೊಸಪಡ್ಪು ಎಂಬಲ್ಲಿ ಶಾಲೆ ಕಟ್ಟುತ್ತಾರೆ. == ಪ್ರಶಸ್ತಿಗಳು == ರಾಜ್ಯೋತ್ಸವ ಪ್ರಶಸ್ತಿ 2004 ರಲ್ಲಿ ಕನ್ನಡಪ್ರಭ ಪತ್ರಿಕೆ ಹಾಜಬ್ಬರನ್ನು “ವರ್ಷದ ವ್ಯಕ್ತಿ” ಎಂದು ಪ್ರಶಸ್ತಿ ನೀಡಿದೆ. ಸಿಎನ್ಎನ್-ಐಬಿಎನ್ ಪ್ರಶಸ್ತಿ ನೀಡಿದೆ. ಪದ್ಮಶ್ರೀ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿಯನ್ನು ನವೆಂಬರ್ 8 2021 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರಧಾನವಾಯಿತು. == ಉಲ್ಲೇಖ- ==